ಸೋಮವಾರ, ಜೂನ್ 28, 2021

ತ್ರಿಪದಿ

ತ್ರಿಪದಿಯು ಅಚ್ಚಗನ್ನಡ ಛಂದೋ ಮಟ್ಡು. ಕನ್ನಡ ಜನಪದ ಗೀತೆಗಳ ಬಹುಭಾಗ ತ್ರಿಪದಿಯಲ್ಲಿವೆ. ಆದ್ದರಿಂದ ತ್ರಿಪದಿಯನ್ನು ಕನ್ನಡ ವೃತ್ತಗಳ ಗಾಯತ್ರಿ ಎಂದು ಕರೆಯಲಾಗುತ್ತದೆ. ಶಾಸನ ಸಾಹಿತ್ಯಗಳಲ್ಲಿಯೂ ತ್ರಿಪದಿ ಸ್ಥಾನಪಡೆದಿದೆ. ತ್ರಿಪದಿಯಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿದ ಇನ್ನೊಂದು ಸಾಹಿತ್ಯ ರೂಪ ಕನ್ನಡದಲ್ಲಿಲ್ಲ . ತ್ರಿಪದಿಯ ಲಕ್ಷಣ ನಾಗವರ್ಮ ಜಯಕೀರ್ತಿ ಸರ್ವಜ್ಞ ಸೋಮೇಶ್ವರ ಮುಂತಾದವರು ತಮ್ಮ ಚಂದು ಗ್ರಂಥಗಳಲ್ಲಿ ತ್ರಿಪದಿಯ ಲಕ್ಷಣವನ್ನು ಪ್ರಸ್ತಾಪಿಸಿದ್ದಾರೆ ಹೆಸರೇ ಸೂಚಿಸುವಂತೆ ತಿರುಪತಿ ಮೂರು ಸಾಲುಗಳನ್ನು ಒಳಗೊಂಡಿದೆ ಸರ್ವಜ್ಞ ಸೋಮೇಶ್ವರನ ಮಾನಸೋಲ್ಲಾಸ ದಲ್ಲಿ ತಿರುಪತಿಯನ್ನು ನಾಲ್ಕು ಸಾಲುಗಳನ್ನು ಪರಿಗಣಿಸಿದ್ದಾರೆ ನಾಗವರ್ಮ ಹೇಳಿದ ತ್ರಿಪದಿಯ ಲಕ್ಷಣ ಹೀಗಿದೆ. u u. u . _ . u u. u._. uu.u._._. u. _ ಬಿಸರುಹೋ|ದ್ಭವಗಣಂ| ರಸದಶ|ಸ್ಥಾನದೊಳ್| uu.u.u. _. u. uu. u._. u u. u.u. ಬಿಸರುಹ| ನೇತ್ರ | ಗಣಮೆಬl ರ್ಕುಳಿದವು| u u.u.u. _. _. u u.u.u. ಬಿಸರುಹ| ನೇತ್ರೇ| ತ್ರಿಪದಿಗೆ ಈ ಪದ್ಯ ತ್ರಿಪದಿಯ ಲಕ್ಷಣ ಹೇಳುವುದರ ಜೊತೆಗೆ ತ್ರಿಪದಿಯ ಲಕ್ಷ್ಯವೂ ಆಗಿದೆ .ತ್ರಿಪದಿಯ ರಸ ಅಂದರೆ ಆರನೆಯ ಸ್ಥಾನದಲ್ಲಿ, ಮತ್ತು ದಶ ಅಂದರೆ ಹತ್ತನೆಯ ಸ್ಥಾನದಲ್ಲಿ ಬ್ರಹ್ಮಗಣಗಳು ಬರುತ್ತವೆ. ಉಳಿದ ಗಣಗಳು ವಿಷ್ಣುಗಣಗಳಾಗಿರುತ್ತವೆ. ನಾಗವರ್ಮ ಚಿತ್ರ ಮತ್ತು ವಿಚಿತ್ರ ಎಂಬ ತ್ರಿಪದಿಯ ಎರಡು ಪ್ರಭೇದಗಳನ್ನು ಹೇಳುತ್ತಾನೆ .ಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇರುತ್ತದೆ. ಆದರೆ ವಿನ್ಯಾಸದ ದೃಷ್ಟಿಯಿಂದ ನಾಲ್ಕು ಪಾದಗಳು ಆಗುತ್ತವೆ. ವಿಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇದ್ದರೂ ಕೊನೆಯ ಗಣ ರುದ್ರಗಣವಾಗಿರುತ್ತದೆ. ಒಟ್ಟಿನಲ್ಲಿ ಲಕ್ಷಣವನ್ನು ಹೀಗೆ ಸಂಗ್ರಹಿಸಬಹುದು: 1) ತ್ರಿಪದಿಯಲ್ಲಿ 3 ಸಾಲುಗಳಿರುತ್ತವೆ. 2) ಒಟ್ಟು11 ಗಣಗಳಿರುತ್ತವೆ. ಆರು ಮತ್ತು ಹತ್ತನೆಯ ಗಣಗಳು ಬ್ರಹ್ಮ ಗಣಗಳು, ಉಳಿದ ಗಣಗಳು ವಿಷ್ಣುಗಣಗಳು. 3) ಲಕ್ಷಣವನ್ನು ಗಮನಿಸಿದರೆ ಏಳು ಮತ್ತು ಹನ್ನೊಂದನೆಯ ಗಣಗಳು ಎರಡು ಲಘು ಗಳಿಂದ ಪ್ರಾರಂಭವಾಗುತ್ತವೆ. 4) ತಿರುಪತಿಯಲ್ಲಿ ಚಿತ್ರ ಮತ್ತು ವಿಚಿತ್ರ ಎಂಬ ಎರಡು ಪ್ರಭೇದಗಳನ್ನು ಗುರುತಿಸಲಾಗುತ್ತದೆ. 5)ತ್ರಿಪದಿಯ ಒಟ್ಟು ಗಣ ವಿನ್ಯಾಸ ಹೀಗೆ ಗುರುತಿಸಬಹುದು: ವಿಷ್ಣು| ವಿಷ್ಣು |ವಿಷ್ಣು| ವಿಷ್ಣು | ವಿಷ್ಣು |ಬ್ರಹ್ಮ| ವಿಷ್ಣು | ವಿಷ್ಣು |ವಿಷ್ಣು| ಬ್ರಹ್ಮ|ವಿಷ್ಣು| ತ್ರಿಪದಿ ಒಂದು ಹಾಡುಗಬ್ಬವಾಗಿರುವುದು. ಹಾಡುವಾಗ ಮೊದಲ ಎರಡು ಪಾದಗಳಲ್ಲಿನ 7 ಗಣಗಳವರೆಗೆ ಒಂದು ಘಟಕವಾಗಿ ಹಾಡಿ ನಂತರ ಐದನೆಯ ಗಣದಿಂದ ಪ್ರಾರಂಭಿಸಿ ಮತ್ತೆ ಹಾಡಬೇಕು. ಇದರಿಂದ ತ್ರಿಪದಿ ನಾಲ್ಕು ಸಾಲುಗಳು ಎನ್ನಿಸುತ್ತದೆ. ತ್ರಿಪದಿ ಅಂಶಗಣ ಛಂದಸ್ಸು ಆಗಿರುವುದರಿಂದ ಅಲ್ಲಿಗೆ ವಿಕಲ್ಪತೆಗೆ ಅವಕಾಶವಿದೆ. ಅಂದರೆ ವಿಷ್ಣು ಗಣ ಸ್ಥಾನದಲ್ಲಿ ಬ್ರಹ್ಮ ಗಣಗಳಾಗಲಿ, ರುದ್ರ ಗಣಗಳಾಗಲಿ ಬರ ಬಹುದು ಆದರೆ ಆರು ಮತ್ತು 10ನೆಯ ಗಣ ಸ್ಥಾನದಲ್ಲಿ ವಿಕಲ್ಪತೆಗೆ ಅವಕಾಶವಿಲ್ಲ. ಅಲ್ಲಿ ಬ್ರಹ್ಮಗಣ ಬರಲೇಬೇಕು. ಕನ್ನಡದಲ್ಲಿ ಮೊಟ್ಟಮೊದಲ ತ್ರಿಪದಿಯ ಲಿಖಿತ ದಾಖಲೆಗಳು ಕ್ರಿಸ್ತಶಕ 700 ರ ಬಾದಾಮಿ ಶಾಸನದಲ್ಲಿ ದೊರಕುತ್ತದೆ. ಐತಿಹಾಸಿಕ ಮತ್ತು ಸಾಹಿತ್ಯಕ ದೃಷ್ಟಿಯಿಂದ ಮಹತ್ವಪೂರ್ಣವಾದ ತ್ರಿಪದಿ ಇದಾಗಿದೆ. ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ || ಈ ತ್ರಿಪದಿ ನಾಗವರ್ಮ ಹೇಳಿದ ಲಕ್ಷಣಕ್ಕೆ ಅನುಗುಣವಾಗಿದೆ ಇಲ್ಲಿ ಮೂರನೆಯ ಗಣವನ್ನು ವಿಷ್ಣುಗಣವನ್ನಾಗಿ ವಿಭಜಿಸಿದರೆ ಒಳ ಪ್ರಾಸಕ್ಕೆ ಭಂಗ ಬರುವುದರಿಂದ ಅದನ್ನು ಬ್ರಹ್ಮಗಣವನ್ನಾಗಿ ಮಾಡಿ ಮೂರನೆಯ ಗಣವನ್ನು ರುದ್ರಗಣವನ್ನಾಗಿ ಪರಿವರ್ತಿಸಬಹುದು. ಸೊರಬ,ಹುಂಚ, ಹೇಮಾವತಿ, ನೀಲಗುಂದ, ಮತ್ತು ಶಿಕಾರಿಪುರದ ಶಾಸನಗಳಲ್ಲಿ ತ್ರಿಪದಿಗಳು ದೊರಕುತ್ತವೆ. ಪಂಪನ ನಾಗವರ್ಮ ಚಾವುಂಡರಾಯ ನಾಗಚಂದ್ರ ಮುಂತಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ. ಮಾತ್ರಗಣಾನ್ವಿತ ತ್ರಿಪದಿಗಳು : ಅಂಶಗಣಾನ್ವಿತವಾದ ತ್ರಿಪದಿಗಳು 12ನೆಯ ಶತಮಾನದ ನಂತರ ಮಾತ್ರಗಣವಾಗಿ ಪರಿವರ್ತಿತವಾದದ್ದನ್ನು ವಿದ್ವಾಂಸರು ಗುರುತಿಸುತ್ತಾರೆ. ಮಾತ್ರಾ ಗಣಾನ್ವಿತ ತ್ರಿಪದಿಗಳಲ್ಲಿ ವಿಷ್ಣು ಗಣದ ಬದಲು ಅದೇ ವ್ಯಾಪ್ತಿಯ ಐದು ಮಾತ್ರೆಯ ಗಣಗಳು, ಬ್ರಹ್ಮ ಗಣದ ಬದಲು 3-4 ಮಾತ್ರೆ ಗಣಗಳು ಬರುತ್ತವೆ. ಸರ್ವಜ್ಞ ಈ ಪುಟ್ಟ ಛಂದಸ್ಸನ್ನು ಸಮರ್ಥವಾಗಿ ತನ್ನ ಕಾವ್ಯ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾನೆ.ಅವನ ತ್ರಿಪದಿಗಳು ಅಂಶಗಣ ಘಟಿತವಾಗಿರದೆ ಮಾತ್ರಗಣ ಘಟಿತವಾಗಿವೆ. ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಇಲ್ಲಿ ಆರು ಮತ್ತು ಹತ್ತನೆಯ ಸ್ಥಾನದಲ್ಲಿ ಮೂರು ಮಾತ್ರೆಯ ಗಣಗಳು ಬರುತ್ತವೆ. ಉಳಿದಂತೆ ಐದು ಮಾತ್ರೆಯ ಗಣಗಳಿವೆ. ಜನಪದ ಕಾವ್ಯಗಳಲ್ಲಿ ತನ್ನ ಮುದ್ರೆಯನ್ನು ಸ್ಪಷ್ಟವಾಗಿ ಒತ್ತಿದ ತ್ರಿಪದಿಯನ್ನು ಹೊಸಗನ್ನಡದಲ್ಲಿ ಮಾಸ್ತಿ, ಬೇಂದ್ರೆ ,ಪುತಿನ,ಎಸ್.ವಿ. ಪರಮೇಶ್ವರಭಟ್ಟರು ಸಮರ್ಥವಾಗಿ ಬಳಸಿದ್ದಾರೆ.ಶ್ರೀಮತಿ ಜಯದೇವಿತಾಯಿ ಲಿಗಾಡೆ ಎಂಬ ಕವಯಿತ್ರಿ ತ್ರಿಪದಿಯನ್ನು ಬಳಸಿಕೊಂಡು ಶ್ರೀ ಸಿದ್ದರಾಮೇಶ್ವರ ಪುರಾಣ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಅಲ್ಲಿ ಒಟ್ಟು 4100 ತ್ರಿಪದಿಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ